ಲೋಕೇಶಿಯ ಕಥಾಪ್ರಸಂಗ

ಮುಗಿದು ಹೋಯಿತೆಲ್ಲೋ ಲೋಕೇಶಿ
ನಿನ್ನ ಕಥೆ
ನೆಗದು ಬಿತ್ತಲ್ಲೋ ಕೋಟೆ
ಹುಡುಗನೊಬ್ಬ ಸೇದಿ ಬಿಸಾಡಿದ ಬೀಡಿಯ ಬೆಂಕಿಗೆ
ಧಗಧಗಿಸಿ ಹೋಯಿತಲ್ಲೋ ನಿನ್ನ ಸುವರ್ಣಲಂಕೆ !
ಆನೆ ಅಂಬಾರಿ ಛತ್ರ ಆಂತಃಪುರ ಎಲ್ಲ
ಮಣ್ಣು ಮುಕ್ಕಿ ಹೋಯಿತಲ್ಲೋ ಮಂಕೆ!

ಹಾಯ್ ಬೆಂಗಳೂರೇ, ಹಾಯ್ ಬೆಂಗಳೂರೇ
ಏನು ಸೇರಿದ್ದಾರೆ ಜನ ಜಂಗೀಕುಸ್ತಿಗೆ!
ಬೆರಗಾಗಿದ್ದಾರೆ ಎಲ್ಲ, ಹುಡುಗ ಹಾಕುವ ಪಟ್ಟಿಗೆ
ಹೇಳುತ್ತಾನೆ ಅವರಲ್ಲೊಬ್ಬ:
ಭಲೆ, ಹೇಗೆ ಹೂಡೆದ ಒಂದೇ ಏಟಿಗ ಅಬ್ಬ!
ಕೈ ಹಿಡಿದರೆ ಕತ್ತು ಹಿಡಿದ
ಕಾಲೆಳಿದರೆ ಸೊಂಟ ಮುರಿದ
‘ಏ ಕುರುಡ, ಏ ಕುರುಡ’ ಎಂದು ಎಳೆದಾಡುತ್ತ
ಬಿಸಿ ಬಾಣಲಿಗೆ ಹಾಕಿ ಹುಳ ಎಂಬಂತೆ ಹುರಿದ.
ಒಂದು ವಿಕೆಟ್ಟೂ ತೆಗೆಯದೆ ನೂರು ರನ್ನಿನ ಸೋಲು!
ದೇವರೇ
ಹೀಗೆ ಹೊಡೆಸಿಕೊಳ್ಳುವ ಬದಲು
ಲೋಟಾ ನೀರಲ್ಲಿ ಹಾರಿ
ಆತ್ಮಹತ್ಯೆ ಮಾಡಿಕೊಳ್ಳುವುದು ಮೇಲು!

ಹಿಂದೆ ಹೇಗಿತ್ತಲ್ಲೊ ಲೋಕೇಶಿ
ನಿನ್ನ ಪದಶಕ್ತಿ, ಸಿದ್ಧಿ!
ಯಾಕಾಯಿತೊ ಅದೀಗ ಹೀಗೆ
ಮುದಿಕತ್ತೆಯ ಲದ್ದಿ ?
ಹೇಗಿದ್ದವನು ಹೇಗಾದೆ,
ಏ ಕುದುರೆ! ಯಾಕೆ ಇಂಥ ಕತ್ತೆಯಾದೆ?
ಕಣ್ಣು ಕಾಣದಿದ್ದರೆ ಹೋಗಲಿ
ಬೇಡವೆ ಬುದ್ಧಿ,
ಯಾಕಾದರೂ ಸುಮ್ಮನಿರದೆ ಸವಾಲು ಕೊಟ್ಟೆ
ಯಾಕಾದರೂ ಹುಲಿಬಾಯಲ್ಲಿ ತಲೆ ಇಟ್ಟೆ?

ಪಾಪ!
ಎಂಥ ನಿನಗೆ ಎಂಥ ಗತಿ!
ಅಲ್ಲ ಸಲ್ಲದವರ ಮೇಲೆಲ್ಲ
ಸುಳ್ಳೇ ಬಗುಳಿದ್ದ ಕೇಡಿಗೆ
ಈಗ ಎಂಜಲ ಹೊಂಡದಲ್ಲಿ
ಪಬ್ಲಿಕ್ಕಾಗಿ ತಿಥಿ.
ತೊಡೆ ಹೊಟ್ಟೆ ಕೆನ್ನೆ ದವಡೆ ಅಂತ
ಹಾಗೆ ಮುಟ್ಟಿ ಮುಟ್ಟಿ ನೋಡಿಕೊಳ್ಳಬೇಡ ಗಾಯ!
ನೋಡುತ್ತಿದ್ದಾರೆ
ಲಕ್ಷ ಲಕ್ಷ ಜನ
ಚಪ್ಪಾಳೆ ಹಾಕಿ
ನಗದೆ ಇರುತ್ತಾರೆಯೇ ಮಾರಾಯ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೊಕ್ಕ ತಲೆ
Next post ಹೂ ನಗೆ ಬೀರಿದಾಗ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…

cheap jordans|wholesale air max|wholesale jordans|wholesale jewelry|wholesale jerseys